Thursday, 23 June 2016

ತೋಚಿದ್ದು, ಗೀಚಿದ್ದು ..

ಹೊಸ ಮಳೆ, ಹಳೆ ನೆನಪು..

ಮರುಕ ಮರೆಮಾಚಲು ಹುಸಿ ನಗು - ಜೀವನ

Friday, 5 September 2014

'ಗೂಂಡಾ ಕಾಯಿದೆ' - ದುರ್ಭಳಕೆಯ ಭೀತಿಯಲ್ಲಿ

'ಗೂಂಡಾ ಕಾಯಿದೆ' ಇದು ಕರ್ನಾಟಕ ರಾಜ್ಯದ ಪ್ರಸ್ತುತ ವರ್ತಮಾನದಲ್ಲಿ ಬಹುವಾಗಿ ಚರ್ಚಿಸಲ್ಪದುತ್ತಿರುವ ವಿಷಯ. ಈಗಾಗಲೇ ರಾಜ್ಯದ ಅನೇಕ ಕಾನೂನು ಬಾಹಿರ ಚಟುವಟಿಕೆಗಳನ್ನು ಗೂಂಡಾ ಕಾಯಿದೆಯಡಿ ತಂದಿರುವ ರಾಜ್ಯಸರ್ಕಾರ ಅದಿನ್ನೆಷ್ಟು ಚಟುವಟಿಕೆಗಳನ್ನು ಗೂಂಡಾ ಕಾಯಿದೆಯಡಿ ತರಬಹುದೆಂದು ಕಾದು ನೋಡಬೇಕು. ಸರ್ಕಾರ, ರಾಜ್ಯದಲ್ಲಿ ಹೆಚ್ಚುತ್ತಿರುವ ಅಹಿತಕರ ಘಟನೆಗಳನ್ನು ಹಾಗೂ ಅಪರಾಧಗಳನ್ನು ತಡೆಗಟ್ಟುವ ಉದ್ದೇಶದಿಂದ ಗೂಂಡಾ ಕಾಯಿದೆಯನ್ನು ತನ್ನ ಬತ್ತಳಿಕೆಯ 'ಸರ್ಪಾಸ್ತ್ರ'ದಂತೆ ಉಪಯೋಗಿಸುತ್ತಿದೆ ಎಂದರೆ ಅತಿಶಯೋಕ್ತಿಎನಿಸಲಾರದು. ಇತ್ತೀಚಿನ ದಿನಗಳವರೆಗೆ, ಕಳ್ಳಭಟ್ಟಿ, ಮಾದಕ ದ್ರವ್ಯಗಳು, ಅನೈತಿಕ/ಕಳ್ಳ ಸಾಗಣೆಗಳು ಹಾಗೂ ಜೂಜು ಇವಿಷ್ಟೇ ಅಪರಾಧಗಳು ಈ ಗೂಂಡಾ ಕಾಯಿದೆಯಡಿ ಶಿಕ್ಷೆಗೆ ಅರ್ಹವಾದ ಅಪರಾದಗಳಾಗಿದ್ದವು. ಆದರೆ ಕರ್ನಾಟಕ ರಾಜ್ಯಸರ್ಕಾರ 'ಆಸಿಡ್ ದಾಳಿಕೋರರು' ಹಾಗೂ 'ಕಾಮುಕರನ್ನು' ಈ ಕಾಯಿದೆಯಡಿ ಸೇರಿಸುವ ಭರದಲ್ಲಿ 'ಭಾರತೀಯ ಕೃತಿಸ್ವಾಮ್ಯ (Indian Copyright Act 1957)' ಹಾಗೂ 'ಮಾಹಿತಿ ತಂತ್ರಜ್ಞಾನ ಕಾಯಿದೆ (Information Technology Act, 2000)' ಸೇರಿದಂತೆ ಇನ್ನೂ ಅನೇಕ ಅಪರಾಧಗಳನ್ನು ಗೂಂಡಾ ಕಾಯಿದೆಯಡಿ ತಂದಿರುವುದು ಚರ್ಚೆಗೆ ಕಾರಣವಾಗಿದೆ. ಅಷ್ಟಕ್ಕೂ ಭಾರತೀಯ ಸಂಹಿಧಾನದ ಪ್ರಕಾರ, ಕೃತಿಸ್ವಾಮ್ಯ (Copyright) ಹಾಗೂ ದೂರಸಂಪರ್ಕ (Telecommunications) ವಿಷಯಗಳು ವಿಶೇಷವಾಗಿ ಕೇಂದ್ರ ವಿಷಯಗಳಾಗಿರುವುದರಿಂದ, ಯಾವುದೇ ರಾಜ್ಯಸರ್ಕಾರ ಅಷ್ಟು ಸುಲಭವಾಗಿ ತಿದ್ದುಪಡಿ ತರಲು ಸಾಧ್ಯವಿರುವುದಿಲ್ಲವಾಗಿತ್ತು ಎಂಬುದು ಗಮನಿಸಬೇಕಾದ ಅಂಶವಾಗಿದೆ.

ಭಾರತೀಯ ಕಾನೂನು ತಿದ್ದುಪಡಿ 2001 ರ ಕಾಯಿದೆ 16, Section 2(ಜಿ) ಯ ಪ್ರಕಾರ 'ಗೂಂಡಾ' ಎಂಬುದರ ವ್ಯಾಖ್ಯಾನ, "ವ್ಯಕ್ತಿ, ವಯಕ್ತಿಕವಾಗಿ ಇಲ್ಲವೇ ಒಂದು ಗುಂಪಿನ ಮುಖ್ಯಸ್ತನಾಗಿ ಅಥವಾ ಗುಂಪಿನ ಸಾಮಾನ್ಯ ಸದಸ್ಯನಾಗಿ, ಅಪರಾಧ ಅಥವಾ ಅಪರಾಧ ಪ್ರಯತ್ನವನ್ನು ಪುನರಾರಂಬಿಸಿದರೆ ಅಥವಾ ಅಪರಾಧಕ್ಕೆ ಉತ್ತೇಜನ ನೀಡಿದ್ದಲ್ಲಿ ಆ ವ್ಯಕ್ತಿ, ಭಾರತೀಯ ದಂಡಸಂಹಿತೆ 1860 ರ ಕೇಂದ್ರ ಕಾಯಿದೆ 45 ರ ಅಡಿಯಲ್ಲಿ ಶಿಕ್ಷೆಗೆ ಅರ್ಹನಾಗಿರುತ್ತಾನೆ." ಎಂದಾಗಿರುತ್ತದೆ.

ಕರ್ನಾಟಕ ಶಾಸಕಾಂಗ ಸಭೆ, ಕಳೆದ ಜುಲೈ 28 ರಂದು ನೀಡಿದ ಗೂಂಡಾ ಕಾಯಿದೆಯ ತಿದ್ದುಪಡಿಯ ವ್ಯಾಖ್ಯಾನಕ್ಕೆ, ಶಾಸಕರ ಬಹುಮತ ದೊರಕಲು ಸದನದಲ್ಲಿ ಹೆಚ್ಚು ಸಮಯ ಹಿಡಿಯಲಿಲ್ಲ. ಈ ನೂತನ ತಿದ್ದುಪಡಿಯ ಅಡಿಯಲ್ಲಿ 'ಕಳ್ಳಭಟ್ಟಿ, ಮಾದಕ ದ್ರವ್ಯಗಳು, ಜೂಜು, ಗೂಂಡಾಗಳು, ಅನೈತಿಕ/ಕಳ್ಳ ಸಾಗಣಿಕೆಗಳು, ಕೊಳೆಗೇರಿ ಅತಿಕ್ರಮಣ, ದೃಶ್ಯ ಹಾಗೂ ಶ್ರವಣ ಪ್ರತಿಗಳ ನಕಲು, ಆಸಿಡ್ ದಾಳಿಕೋರರು, ಪ್ರಾಣಿ/ಪಕ್ಷಿ/ಪರಿಸರ ಗಳ ಮೇಲಿನ ದಾಳಿಕೋರರು, ಡಿಜಿಟಲ್ ಅಪರಾಧಿಗಳು ಹಾಗೂ ಲೈಂಗಿಕ ಪರಭಕ್ಷಕರು' ಗೂಂಡಾ ಕಾಯಿದೆಯಡಿಯ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡವು. 

ಈ ಮೊದಲು 'ಕೃತಿ ಚೌರ್ಯ' (Piracy) ಅಥವಾ 'ತಂತ್ರಜ್ಞಾನ ನಕಲು' ಎಂಬ ಅಪರಾಧಗಳು ಕೇವಲ ಸಿನೆಮಾ DVD ಹಾಗೂ ಸಾಫ್ಟ್ ವೇರ್ ಗಳಷ್ಟೇ ಗೂಂಡಾ ಕಾಯಿದೆ ಅಡಿಯಲ್ಲಿ ಸೀಮಿತವಾದ ಅಪರಾಧಗಳಾಗಿದ್ದವು. ಆದರೆ ರಾಜ್ಯಸರ್ಕಾರದ ನೂತನ ತಿದ್ದುಪಡಿಯ ಪ್ರಕಾರ ಪುಸ್ತಕಗಳು, ಸಿನಿಮಾ ಹಾಡುಗಳು, ಸಂಗೀತ ಹಾಗೂ ಬಹುರಾಷ್ಟ್ರೀಯ ಕಂಪನಿಗಳು ಹೊಂದಿರುವಂತಹ ಕೃತಿಸ್ವಾಮ್ಯಗಳಿಗೆ (Copyright) ಒಳಪಡುವ ಎಲ್ಲ ವಸ್ತುಗಳು ಕೂಡ ಗೂಂಡಾ ಕಾಯಿದೆಯಡಿಗೆ ಒಳಪಡುತ್ತವೆ. ಸರ್ಕಾರದ ಈ ಕ್ರಮದಿಂದ ಸಾಮಾನ್ಯ ಜನರಮೇಲೆ ಅನಾನುಕೂಲವೇ ಹೆಚ್ಚಾಗಿರುವುದು ವಿಪರ್ಯಾಸವೇ ಸರಿ.

ಹಲವು ನ್ಯಾಯವಾದಿಗಳ ಪ್ರಕಾರ ಗೂಂಡಾ ಕಾಯಿದೆಯಡಿ ಅಪರಾಧಿಯನ್ನು 'ಅಪರಾಧ ತಡೆಗಟ್ಟುವ' (Preventive Arrest) ಆದಾರದಮೇಲೆ, ಅಪರಾಧ ಎಸಗುವ/ಸಾಭೀತಾಗುವ ಮೊದಲೇ ಬಂಧಿಸುವ ಅವಕಾಶ ಕಾನೂನಿಗಿರುತ್ತದೆ. ಅದೇ  Information Technology Act ಹಾಗೂ The Copyright Act ಅಡಿಯಲ್ಲಿ ಅಪರಾಧ ಎಸಗಿದ್ದು ಸಾಭೀತಾದರೆ ಮಾತ್ರ ಬಂಧಿಸಬಹುದಾಗಿತ್ತು. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಇತರ ಬಂಧನದಲ್ಲಿ ಬಂಧಿತ ವ್ಯಕ್ತಿ ತಕ್ಷಣ ಜಾಮೀನು ಅರ್ಜಿ ಸಲ್ಲಿಸಬಹುದು. ಆದರೆ ಗೂಂಡಾ ಕಾಯಿದೆಯಡಿಯಲ್ಲಿ ಭಂದಿತ ವ್ಯಕ್ತಿಗೆ ಈ ಅವಕಾಶವಿರುವುದಿಲ್ಲ, ಗೂಂಡಾ ಕಾಯಿದೆಯಲ್ಲಿ ಜಾಮೀನು ಎಂಬುದು ಒಂದು ಸುದೀರ್ಘ ಪ್ರಕ್ರಿಯೆ ಯಾಗಿರುತ್ತದೆ. ಎಲ್ಲಕ್ಕಿಂತ ಹೆಚ್ಹಾಗಿ ಗೂಂಡಾ ಕಾಯಿದೆಯಡಿ ಬಂಧಿತ ವ್ಯಕ್ತಿಯ ವಿವರ  ಪೋಲಿಸ್ ಠಾಣೆ ಯಲ್ಲಿ ಶಾಶ್ವತ ಧಾಖಲಾಗುತ್ತದೆ.

CISನ (The Center for Internet & Society) ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ ಸುನಿಲ್ ಅಬ್ರಹಾಂ ಅವರು ಗೂಂಡಾ ಕಾಯಿದೆಯ ತಿದ್ದುಪಡಿಯ ದುಷ್ಪರಿಣಾಮಗಳ ಬಗ್ಗೆ ಸೂಕ್ತ ಉದಾಹರಣೆಯೊಂದಿಗೆ ನೀಡಿದ ವಿವರ ಇಂತಿದೆ, ಒಬ್ಬ ವ್ಯಕ್ತಿ, ವೈಜ್ಞಾನಿಕ ದೃಷ್ಟಿಯಲ್ಲಿ ಒಬ್ಬ ಮನುಷ್ಯನ ದೇಹರಚನೆ, ಅಂಗಾಂಗಗಳ ವಿವರಣೆ ನೀಡುವ ಉದ್ದೇಶದಿಂದ ಒಂದು ಮಾನವನ ನಗ್ನ ಚಿತ್ರವನ್ನು ಪ್ರಕಟಿಸಿದ್ದಲ್ಲಿ ಅದು ಅಶ್ಲೀಲ/ಕಾಮ ಪ್ರಚೋದಕ ವಾಗಲು ಸಾಧ್ಯವಿಲ್ಲ, ಆದರೆ ಒಂದುವೇಳೆ ಆ ವ್ಯಕ್ತಿಯನ್ನು Information Technology ಕಾಯಿದೆಯಡಿ ಬಂದಿಸಿದ್ದಲ್ಲಿ, ಆತನನ್ನು ಮುಂದಿನ 24 ಘಂಟೆಯೊಳಗೆ ನ್ಯಾಯಾಧೀಶರ ಸಮ್ಮುಖದಲ್ಲಿ ಹಾಜರು ಪಡಿಸಲಾಗುವುದು, ಆತ ನ್ಯಾಯಾಧೀಶರಿಗೆ ನಡೆದ ಘಟನೆಯ ವಿವರಣೆ ನೀಡುವ ಅವಕಾಶವಿರುತ್ತದೆ. ಆದರೆ ಆತನನ್ನು ಗೂಂಡಾ ಕಾಯಿದೆಯಡಿ ಬಂಧಿಸಿದರೆ, ನ್ಯಾಯಾಧೀಶರ ಮುಂದೆ ಹಾಜರುಪಡಿಸಲು 90 ದಿನಗಳ ಅವಕಾಶವಿದ್ದು ಅದನ್ನು ಒಂದು ವರ್ಷಗಳವರೆಗೆ ವಿಸ್ತರಿಸುವ ಸಾದ್ಯತೆ ಕೂಡ ಇರುತ್ತದೆ. ಇದರಿಂದ ವ್ಯಕ್ತಿ ತನ್ನದಲ್ಲದ ತಪ್ಪಿಗೆ ಒಂದು ವರ್ಷಗಳ ಕಾಲ ಶಿಕ್ಷೆ ಅನುಭವಿಸುವುದು ನಿರ್ದಯ ಎನಿಸುವುದಿಲ್ಲವೇ? ಇದೆ ರೀತಿ, ಈ ಮೊದಲು Copyright ಕಾಯಿದೆಯಡಿಯಲ್ಲಿ ಅಂಗವೈಕಲ್ಯದಿಂದ ಬಳಲುತ್ತಿರುವವರಿಗೆ, ಸಂಶೋಧನೆ ಹಾಗೂ ಶೈಕ್ಷಣಿಕ ವರದಿಗಳಲ್ಲಿ ರಿಯಾಯತಿ ಇದ್ದವು, ಈ ಕಾಯಿದೆಯ ಪ್ರಕಾರ ಒಬ್ಬ ದೃಷ್ಟಿಹೀನ ವ್ಯಕ್ತಿ ಯಾವುದೇ ಗೌರವಧನ ಪಾವತಿಸದೇ ಒಂದು ಪುಸ್ತಕವನ್ನು ಬ್ರೈಲ್(ಅಂಧರ ಲಿಪಿ) ಅಥವಾ ಆಡಿಯೋ ಸ್ವರೂಪಕ್ಕೆ ತರ್ಜುಮೆಗೊಳಿಸಿ ಇನ್ನೊಬ್ಬ ದೃಷ್ಟಿಹೀನ ವ್ಯಕ್ತಿಗೆ ಉಚಿತವಾಗಿ ನೀಡಿದ್ದಲ್ಲಿ ಅದು ಅಪರಾಧವಾಗುತ್ತಿರಲಿಲ್ಲ. ಆದರೆ ಈಗಿನ ಗೂಂಡಾ ಕಾಯಿದೆಯಡಿ ಆ ದ್ರಷ್ಟಿಹೀನ ವ್ಯಕ್ತಿ ತನ್ನದಲ್ಲದ ತಪ್ಪಿಗೆ ಕನಿಷ್ಠ ಒಂದು ವರ್ಷ ಸಜೆಯನ್ನು ಅನುಭವಿಸಬೇಕಾಗಿರುವುದು ಎಷ್ಟು ಸಮಂಜಸ?

ಈ ಎಲ್ಲ ಬೆಳವಣಿಗೆಯಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ Cyber Crime ನ ಬಗ್ಗೆ ಜನಸಾಮಾನ್ಯರಲ್ಲಿ ಸಂಪೂರ್ಣ ಜ್ಞಾನ ಇಲ್ಲದಿರುವುದು, ಈ ಬಗ್ಗೆ ಜನರಲ್ಲಿ ಜಾಗ್ರತಿ ಮೂಡಿಸಬೇಕಾದ ಅವಶ್ಯಕತೆ ತೀರ ಅಗತ್ಯವಾಗಿರುತ್ತದೆ. ನಮ್ಮನ್ನಾಳುವ ರಾಜಕಾರಣಿಗಳಿಂದ ಹಿಡಿದು ಸಾಮಾನ್ಯ ಪ್ರಜೆಗಳವರೆಗೆ Cyber Crime ಬಗ್ಗೆ ಯಾರಿಗೂ ಸಂಪೂರ್ಣ ಮಾಹಿತಿಯಿಲ್ಲದಿರುವ ಸಂದರ್ಭದಲ್ಲಿ IT Act ಹಾಗೂ Copyright Act ಗಳನ್ನು ಕೂಡ ಗೂಂಡಾ ಕಾಯಿದೆಯಡಿ ಒಳಪಡಿಸಿರುವುದು ಆತಂಕಕಾರಿ ವಿಷಯವಾಗಿದೆ. ಪ್ರಸ್ತುತ ವರ್ತಮಾನದಲ್ಲಿ ನಮ್ಮ ಬಹುತೇಕ ಯುವಕ/ಯುವತಿಯರು ಸಾಮಾಜಿಕ ಜಾಲತಾಣಗಳಾದ WhatsApp, Facebook, Twitter, ಇತ್ಯಾದಿ ಗಳಿಗೆ ದಾಸರಾಗಿರುವುದು ಗೂಂಡಾ ಕಾಯಿದೆಯ ದುರ್ಬಳಕೆಯ ಆತಂಕವನ್ನು ಹೆಚ್ಚಿಸಿದೆ, ಸಾಮಾನ್ಯವಾಗಿ ತನ್ನ ಮೊಬೈಲ್/ಕಂಪ್ಯೂಟರ್ ನಲ್ಲಿ ತನಗೆ ದೊರಕಿದ ಸಂದೇಶ/ವೀಡಿಯೊ/ಆಡಿಯೋ ಗಳನ್ನು ಇತರರೊಂದಿಗೆ ಶೇರ್ ಮಾಡಿಕೊಳ್ಳುವ ಭರದಲ್ಲಿ ತನಗೆ ಅರಿವಿಲ್ಲದೆಯೇ ಗೂಂಡಾ ಕಾಯಿದೆಯಡಿಯಲ್ಲಿ ಸಿಲುಕಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ? 

ಅದೇ ರೀತಿ, ತೀರಾ ಇತ್ತೀಚಿನ ಬೆಳವಣಿಗೆಯಲ್ಲಿ, ಕರ್ನಾಟಕ ಸರ್ಕಾರ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟುವ ಉದ್ದೇಶದಿಂದ, ಸ್ತ್ರೀ ಪೀಡಕರು, ನಿಂದಕರು, ಪ್ರೀತಿ ಹೆಸರಿನಲ್ಲಿ ಮೋಸ/ವಂಚನೆ ಯನ್ನು ಎಸಗುವ ಪುರುಷರನ್ನು ಕೂಡ ಗೂಂಡಾ ಕಾಯಿದೆಯಡಿ ಶಿಕ್ಷಿಸುವ ನಿರ್ಧಾರ ಕೈಗೊಂಡಿರುವುದು ಗೂಂಡಾ ಕಾಯಿದೆಯ ದುರ್ಬಳಕೆಯ ಆತಂಕವನ್ನು ಇನ್ನೂ ಹೆಚ್ಚಿಸಿದೆ. ಈ ರೀತಿ ಕಾನೂನು ದುರ್ಭಳಕೆಯಾದ ಅದೆಸ್ಟೋ ಘಟನೆಗಳು ವರದಿಯಾಗುತ್ತಲೇ ಇರುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಈ ರೀತಿಯ ದೌರ್ಜನ್ಯ ಮಹಿಳೆಯರ ಮೇಲಷ್ಟೇ ಆಗಬೇಕೆಂದೇನಿಲ್ಲ, ಅದೆಷ್ಟೋ ಪುರುಷರು ಕೂಡ ಮಹಿಳೆಯರಿಂದ ಕಿರುಕುಳಕ್ಕೊಳಗಾಗಿ ಆತ್ಮಹತ್ಯೆ, ಖಿನ್ನತೆ  ಹಾಗೂ ಸಮಾಜ ಘಾತುಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ವರದಿಗಳು ಪುರುಷರ ಮೇಲಿನ ದೌರ್ಜನ್ಯವನ್ನು ಪುಷ್ಟೀಕರಿಸುತ್ತದೆ. ಈಗಾಗಲೇ ವರದಕ್ಷಿಣೆ ನಿರ್ಮೂಲನೆ ಕಾಯಿದೆ (Section 498(A) of IPC and Sections 3 and 4 of Dowry Prohibition Act ) ದುರ್ಬಳಕೆಯಾದ ಕಾನೂನಿಗೆ ಒಂದು ಜ್ವಲಂತ ಉದಾಹರಣೆ ಎನ್ನಬಹುದು.  

ಹಲವು ಕಾನೂನು ತಜ್ಞರ ಪ್ರಕಾರ ಗೂಂಡಾ ಕಾಯಿದೆಯಲ್ಲಿನ ತಿದ್ದುಪಡಿ ಹಾಗೂ ಸೇರಿಸಿರುವ ಹೊಸ ವಿಷಯಗಳು ಖಂಡಿತ ಜನಸಾಮಾನ್ಯರಿಗೆ ಅನೇಕ ದುಷ್ಪರಿಣಾಮವನ್ನು ಉಂಟುಮಾಡುವುದರಲ್ಲಿ ಸಂಶಯವಿಲ್ಲ. ಸರ್ಕಾರ ಸಮಾಜದ ಹಿತಕಾಪಾಡುವ ದೃಷ್ಟಿಯಿಂದ ರೂಪಿಸಿರುವ ಕಾನೂನು ದುರ್ಭಳಕೆಯಾಗದಂತೆ ಕಾಪಾಡುವುದು ಸರ್ಕಾರದ ಜವಾಬ್ಧಾರಿಯಾಗಿರುತ್ತದೆ. ಕಾನೂನು ತಜ್ಞರು, ಗೂಂಡಾ ಕಾಯಿದೆಯ ಮೂಲ ಉದ್ದೇಶ ಹಾಗೂ ಸಮಾಜದ ಸ್ವಾಸ್ತ್ಯ ಕಾಪಾಡುವ ನಿಟ್ಟಿನಲ್ಲಿ, ಗೂಂಡಾ ಕಾಯಿದೆಯ ತಿದ್ದುಪಡಿಯಬಗ್ಗೆ ಕೂಲಂಕುಶವಾಗಿ ಮರುಪರಿಶೀಲಿಸಿ, ಅಮೂಲಾಘ್ರ ಬದಲಾವಣೆಗಳನ್ನು ತರಬೇಕಾಗಿವ ಅವಶ್ಯಕತೆ ಇರುತ್ತದೆ.

ನಿಮ್ಮವ,
ಪಚ್ಚಿ

Monday, 11 August 2014

ಹೀಗೊಂದು Second hand Love story...!

"Dude.. It's been just 6 months right, Just forget her and move on.. ಅಲ್ಲ ಕಣೋ ನಿನ್ನ ಪುಣ್ಯಕ್ಕೆ ಈಗಲೇ ಎಲ್ಲ ಗೊತ್ತಾಯ್ತು, ಒಂದುವೇಳೆ ನೀನು ಮನೆಯಲ್ಲಿ ಈ ವಿಚಾರ Discuss ಮಾಡಿ, ಮದುವೆ Arrange ಆಗೋ ಟೈಮ್ ಅಲ್ಲಿ ಹೀಗೆ ಆಗಿದ್ರೆ ಏನೋ ಕತೆ, ಆಗೋದೆಲ್ಲ ಒಳ್ಳೆಯದಿಕ್ಕೆ ಕಣೋ, Come on, Cheer up" ಅಂತ ಒಬ್ಬ ಸ್ನೇಹಿತ ಸಮಾಧಾನ ಮಾಡೋಕೆ ಪ್ರಯತ್ನ ಪಡ್ತಾ ಇದ್ದ.. ಜಾಸ್ತಿ ಅಳೋಕೆ ನಾಚಿಕೆ, ಪೂರ್ತಿಯಾಗಿ ಒಂದು ಸಲ ಅಳದೇ ಮಾತಾಡೋಕೇ ಆಗಲ್ಲ ಅನ್ನೋ ಸ್ತಿತಿಯಲ್ಲಿ ಅವನ ಗೆಳೆಯ, "ಹೂಂ ಕಣೋ.. ನಿಜ, ಎಲ್ಲ ಈಗಲೇ ಗೊತ್ತಾಯ್ತು, ಸರಿ ಆಗ್ತೀನಿ ಬಿಡು.. It's Okay" ಅಂತ ತನ್ನಷ್ಟಕ್ಕೆ ತಾನೇ ಅಂದುಕೊಳ್ಳುತ್ತಾ ಆಕಾಶದತ್ತ ಮುಖ ಮಾಡಿದವನ ಕಣ್ಣಾಲಿಗಳು ತೇವಗೊಂಡಿದ್ದವು, ದುಖ ಉಮ್ಮಳಿಸಿ ಬರುತ್ತಿತ್ತು..

Drinks, Drugs, Smoke etc. etc. etc. ಯಾವುದೇ ತರಹದ ಅಭ್ಯಾಸ ಇಲ್ಲದ ಆರೋಗ್ಯವಂತ, ತನ್ನ First 'LOVE failure' ಆದಾಗ ಆ ದುಃಖ ಮರಿಯೋಕೆ ಆಯ್ದುಕೊಂಡದ್ದು ಅದೆಲ್ಲಕ್ಕಿಂತ ಅಪಾಯಕಾರಿಯಾದ ಒಂದು ಪರಿಹಾರವನ್ನು...! Yes.. Immediately He Fell In Love Again...!!! 'ರವಿಂದ್ರ ಸಿಂಗ್' ಎಂಬ ಲೇಖಕ 'I Too Had Love Story' ಅನ್ನೋ ದುರಂತ ಪ್ರೇಮ ಕಥೆಯನ್ನಾದರಿಸಿ ಬರೆದ ಒಂದು ಕಾದಂಬರಿಯನ್ನು ಅವನ ಮೊದಲ ಗೆಳತಿ ತನ್ನ ಇನಿಯನಿಗೆ ಅವಳ ವಿರಹ ವೇದನೆಯನ್ನು ಮನವರಿಕೆ ಮಾಡೋ ಉದ್ದೇಶದಿಂದ ಓದೋಕೆ Suggest ಮಾಡಿದ್ಲು ಅನ್ಸತ್ತೆ.. ಆದರೆ ಈ ಮನುಷ್ಯ ಆ ಕಾದಂಬರಿ ಓದಿದ್ದು ಮಾತ್ರ ಆ ಪ್ರೀತಿಯ ಮುಗ್ದ ಗೆಳತಿ ದೂರ ಆದಮೇಲೆ... ಓದಿದ ಕಥೆಯಲ್ಲಿ ಬರೋ ಕೆಲವು ಸನ್ನಿವೇಶಗಳಲ್ಲಿ ತನ್ನ ಕಥೆಯನ್ನು ಕಲ್ಪಿಸಿಕೊಂಡು ತನ್ನ ಪ್ರೇಯಸಿಯನ್ನು Miss ಮಾಡ್ಕೋತಾ ಇರೋವಾಗ, ಅದೇ 'ರವಿಂದ್ರ ಸಿಂಗ್' ಬರೆದ ಇನ್ನೊಂದು ಕಾದಂಬರಿ - 'Can Love Happen Twice?' ಅನ್ನೋ Tittleಗೇ Impress ಆಗಿ ಆ ಕಾದಂಬರಿ ಓದದೇ ತನ್ನಷ್ಟಕ್ಕೇ ಮನಸಲ್ಲಿ YES, it can happen ಅನ್ನೋ ಮೂರ್ಖ ನಿರ್ಧಾರಕ್ಕೆ ಅದಾಗಲೇ ಅವನು ಬಂದು ಆಗಿತ್ತು..

ನೀರಲ್ಲಿ ಮುಳುಗಿ ಸಾಯುವವನಿಗೆ ಹುಲ್ಲುಕಡ್ಡಿ ಆಸರೆ ಅಂತಾರಲ್ಲ, ಹಾಗಿತ್ತು ಅವನ ಸ್ತಿತಿ.. ಆ ಹುಲ್ಲುಕಡ್ದಿಯಾಗಿ ಆಸರೆಯಾಗೋ ಬರವಸೆಯನ್ನು ನೀಡಿದವಳು ಆತನ ಸಹುದ್ಯೋಗಿ. First Love Is True Love. When it breaks, Rest all will become Medicine for the First ಅಂತಾರಲ್ಲಾ, ಆದರೆ ಈತನ ದುರಾದೃಷ್ಟಕ್ಕೆ He Consumed Expired Medicine..!!! ಆಕೆಯೋ, ಅದಾಗಲೇ ಪ್ರೀತಿಯೆಂಬ ಸಾಗರದಲ್ಲಿ ಈತನಿಗಿಂತ ಆಳಕ್ಕೆ ಇಳಿದು ಮೋಸಕ್ಕೆ ಒಳಗಾದವಳು, ಅದು ಒಂದು ರೀತಿಯಲ್ಲಿ  ಸಮಾನ ಮನಸ್ಕರ ಸಮಾಗಮ ಎನ್ನಬಹುದು..!!! ಹಾಗಾಗಿ ಸ್ನೇಹ ಪ್ರೀತಿಯಾಗಿ ಕವಲೊಡೆಯಲು ಹೆಚ್ಚು ಸಮಯ ಹಿಡಿಯಲಿಲ್ಲ ಹಾಗೆಯೇ ಆ ಪ್ರೀತಿಯ ಸಂಬಂಧ ಕೊನೆಯಾಗಲೂ ಕೂಡ ಹೆಚ್ಚು ಸಮಯಹಿಡಿಯದೇ ಇದ್ದದ್ದು ದುರಂತ.

ಪ್ರೀತಿ 60 ವರ್ಷದ್ದಾಗಿರಲಿ, 6 ವರ್ಷದ್ದಾಗಿರಲಿ, 6 ತಿಂಗಳದ್ದಾಗಿರಲಿ ಪ್ರೀತಿ ಪ್ರೀತಿನೇ ಅಲ್ವ್ವೆ? ಮನುಷ್ಯನಿಗೆ ಒಂದು ವಸ್ತುವಿನ ಪ್ರಾಮುಖ್ಯತೆ ಗೊತ್ತಾಗೋದು ಆತ ಅದನ್ನು ಕಳೆದುಕೊಂದಾಗಲೇ ಅನ್ನೋದು ರೂಡಿಯಲ್ಲಿ ಬಂದಮಾತು, ಹಾಗೆಯೇ ಕಳೆದವಸ್ತು ಪುನಃ ಸಿಗದೇ ಇದ್ದರೂ, ಸಾಮಾನ್ಯವಾಗಿ ಆ ವಸ್ತುವನ್ನು ಹೋಲುವ ಇನ್ನೊಂದು ವಸ್ತು ಸಿಕ್ಕಾಗ ಅದನ್ನು ಇನ್ನಸ್ಷ್ಟು ಜೋಪಾನಮಾಡುವುದು ಮನುಷ್ಯನ ಸಹಜಧರ್ಮ. ಆದರೆ ಇವರಿಬ್ಬರ ವಿಷಯದಲ್ಲಿ ಆ ಮನೋಭಾವ ಇದ್ದದ್ದು ಆತನಿಗೆ ಮಾತ್ರ. He was very serious about his second Love.

ಆ ಹುಡುಗಿ, ಈತನನ್ನು Convince ಮಾಡಲು ಮಾಡಿದ ಪ್ರಯತ್ನ, ಆಕೆ ತೋರಿಸಿದ ಪ್ರೀತಿ, ಕಾಳಜಿ, ನೀಡಿದ ಭರವಸೆಗಳು, ಅತೀ ಎನ್ನಿಸುವಷ್ಟು ಇದ್ದ ಇಬ್ಬರ ನಡುವಿನ ಹೊಂದಾಣಿಕೆ ಎಲ್ಲವೂ ಆತನಲ್ಲಿ ಆಕೆಯಬಗ್ಗೆ Second thought ಗೆ ಅವಕಾಶ ನೀಡಲಿಲ್ಲ. ಆದರೆ ಆ ಹುಡುಗಿಗೆ  ಈತನ ಸ್ನೇಹ, ಪ್ರೀತಿ, ಸಾಮಿಪ್ಯ, ಸಾನಿದ್ಯ ಎಲ್ಲವೂ ಕೇವಲ ಆಕೆ ಅದಾಗಲೇ  ಕಡಿದುಕೊಂಡು ಬಂದ ಅಸಹ್ಯ Relationship ನ ಕೆಟ್ಟ ನೆನಪುಗಳ ನೋವುಗಳನ್ನು ವಾಸಿಮಾಡೊ 'Pain Killer' ಮಾತ್ರೆಯಾಗಿತ್ತು ಅಷ್ಟೆ.

ಒಂದು ಕ್ಷಣ ಕೂಡಾ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಆತ್ಮೀಯತೆ, ಪ್ರತೀನಿತ್ಯ ಆಕೆಯ ಜೊತೆಯಲ್ಲೇ ಕೆಲಸಮಾಡಿ, ಆಕೆಯನ್ನು ಅವಳ ಮನೆಯ ಹತ್ತಿರದವರೆಗೂ ಕೈ ಹಿಡಿದುಕೊಂಡು ಹೋಗಿ ಬಿಟ್ಟು ಬಂದರೂ, ಈತ ಮನೆ ತಲುಪುವಷ್ಟರಲ್ಲಿ 'I Miss You ಕಣೋ' ಅನ್ನೋ ಸಂದೇಶ ಅದಾಗಲೇ ಈತನ ಮೊಬೈಲ್ ನ WhatsApp ಅಪ್ಲಿಕೇಶನ್ ಅಲ್ಲಿ ರವಾನೆಯಾಗಿರುತ್ತಿತ್ತು. ಅವರ ದಿನಚರಿ ಪ್ರಾರಂಭವಾಗುವುದೇ ಇಬ್ಬರ ನಡುವಿನ ಶುಭೋದಯದ ಸಂದೇಶದೊಂದಿಗೆ, ನಿದ್ರಿಸುವ ಸಮಯವನ್ನೊಂದನ್ನು ಹೊರತುಪಡಿಸಿ ಪ್ರತಿ ಕ್ಷಣವೂ ಇಬ್ಬರ ನಡುವೆ Message, Calls ಎಡೆಬಿಡದೆ ವಿನಿಮಯವಾಗುತ್ತಿದ್ದಂತಹ Modern ಪ್ರೀತಿ ಅದು.

ಅದಾಗಲೇ ಕಳೆದುಕೊಂಡ ಪವಿತ್ರ ಪ್ರೀತಿಯ ನೋವನ್ನು ಸಂಪೂರ್ಣ ಮರೆತು, ಪ್ರೀತಿಗೆ ಹಾಗೂ ಜೀವನಕ್ಕೆ ಹೊಸ ಅರ್ಥ ನೀಡಲು ಹೊರಟಿರುವ ಗೆಳತಿಯ ಬಗ್ಗೆ ಅಪಾರ ಕನಸು, ಆಸೆಗಳನ್ನು ಹೊತ್ತು, ಭವಿಷ್ಯದ ಕನಸು ಕಾಣುತ್ತಿದ್ದವನು ಆ ಒಂದು ಮುಂಜಾನೆಯನ್ನು ಖಂಡಿತಾ ಊಹಿಸಿರಲಿಲ್ಲ ಅನ್ಸತ್ತೆ. ಅದು ಮೇ 3, 2014 ಎಂದಿನಂತೆ ಆ ಮುಂಜಾನೆ 'Good Morning ಪಾಪು' ಎಂಬ ಸಂದೇಶ ಕಳುಹಿಸಿದವನಿಗೆ ದೊರಕಿದ Reply ಒಂದುಕ್ಷಣ ಆತನನ್ನು ದಿಘ್ಬ್ರಾಂತಗೊಳಿಸಿತ್ತು, ಜೀವನದಲ್ಲಿ ಎರಡನೇ ಬಾರಿಗೆ ಪ್ರೀತಿಯನ್ನು ಕಳೆದುಕೊಂಡು ಖಿನ್ನನಾಗಿ ಕುಸಿದು ಕೂತಿದ್ದ. ಆ ಹುಡುಗಿ, 'ಪ್ಲೀಸ್ ಕಣೋ, ಪಾಪು ಅಂತ ಕರೀಬೇಡ ನನ್ನ, Let 's Breakup ಅಂತ Reply ಮಾಡಿದ್ಲು. ಆಕೆಯಿಂದ ನಿರೀಕ್ಷಿಸಿರದ ಆ ನಿರ್ಧಾರಕ್ಕೆ ಕಡೇಪಕ್ಷ ಕಾರಣವನ್ನಾದರೂ ತಿಳಿದುಕೊಳ್ಳಬೇಕೆಂದು ಹತಾಶನಾಗಿ, ತೀವ್ರ ದುಖಿತನಾಗಿ ಆಕೆಗೆ Message ಮಾಡ್ತಾ ಇದ್ದ, call ಮಾಡ್ತಾ ಇದ್ದ ಆದರೆ ಯಾವುದಕ್ಕೂ ಪ್ರತ್ಯುತ್ತರ ಮಾತ್ರ ಬರ್ತಾನೆ ಇರಲಿಲ್ಲ. ಹಾಗಂತ ಆಕೆ ತನ್ನ mobile ನೋಡ್ತಾ ಇರಲಿಲ್ಲ ಅಂತೇನು ಅರ್ಥ ಅಲ್ಲ, ಯಾಕೆಂದರೆ ಆಕೆ WhatsApp ನಲ್ಲಿ Online ಇದ್ಲು.

ಒಂದೆರಡು ದಿನ ಕಳೆದರೂ, ಈತ ಪ್ರತಿನಿತ್ಯ, ಪ್ರತಿ ಕ್ಷಣ ಆಕೆ ಬದಲಾಗಬಹುದೇನೋ ಎಂಬ ನಿರೀಕ್ಷೆಯಲ್ಲೇ ಆಕೆಗೆ Message ಮಾಡ್ತಾನೆ ಇದ್ದ, ಕೊನೆಗೂ ಆ ಹುಡುಗಿ Bangalore ಹುಡುಗಿಯರ 'Patented Statement' ಒಂದನ್ನು ಹೇಳಿ ತನ್ನ ಪ್ರೀತಿಯ ನಾಟಕಕ್ಕೆ ಪೂರ್ಣವಿರಾಮವಿಟ್ಟಿದ್ದಳು. 'Sorry ಕಣೋ, I Know, I hurt you ಆದರೆ ಮನೆಯಲ್ಲಿ ಅಪ್ಪ ಅಮ್ಮ ಖಂಡಿತಾ ಒಪ್ಪಲ್ಲ, ಅದಾಗಲೇ ಹುಡುಗನನ್ನು ಹುಡುಕೋಕೆ ಪ್ರಾರಂಭಿಸಿದ್ದಾರೆ, ನನ್ನ ಈ ನಿರ್ಧಾರದಿಂದ ನಿನಗೆ ನೋವಾಗಿದೆ, ಆದರೆ ಇದೆಲ್ಲ ನಮ್ಮ ಒಳ್ಳೆಯದಿಕ್ಕೆ ಕಣೋ, ನೀನು ಚೆನ್ನಾಗಿರು, ಎಲ್ಲ ಒಳ್ಳೇದಾಗತ್ತೆ, Bye ಕಣೋ..' ಎನ್ನೋ ಒಂದು Statement' ನಿಂದ, ತಾನು ಆತನ ಜೊತೆಯಾಗಿ, ಅವನ ಹೃದಯದಲ್ಲಿ ನಿರ್ಮಿಸಿದ ಆತನ ಪ್ರೀತಿಯ ಸೌಧವನ್ನು ತನ್ನ ಎಡಗಾಲಿನಿಂದ ಒದ್ದು ಕೆಡವಿದ್ದಳು. ಆದರೆ ವಾಸ್ತವದಲ್ಲಿ, ಆಕೆ ಅದಾಗಲೇ ತನ್ನ ಹಳೆಯ Boyfriend ನ Facebook ಅಕೌಂಟ್ ನಲ್ಲಿ ಪುನಃ ಸ್ಥಾನ ಪಡೆದಿದ್ದಳು, ಆತನ ಎಲ್ಲ update ಗಳಿಗೂ ಈಕೆಯ Like ಗಳು, ಈಕೆಯ updates ಗಳಿಗೆ ಆತನ Like ಗಳು…!!!

ಆಕೆ ಅವಳ ಹಳೆಯ ನೋವಿನ ಕಥೆಯನ್ನು ಹೇಳಿಕೊಂಡು ಅತ್ತಾಗಲೆಲ್ಲ ಆಕೆಯನ್ನು ಪ್ರೀತಿಯಿಂದ ಆಲಿಂಗಿಸಿ ಆಕೆಯ ಕಣ್ಣೀರನ್ನು ಒರೆಸಿ, ಆಕೆಗೆ ಆಕೆಯ ಜೀವನದಮೇಲೆ ಪ್ರೀತಿಯನ್ನು, ಹೊಸ ಭರವಸೆಯನ್ನೂ ಕರುಣಿಸಿದವನ ನಿಷ್ಕಲ್ಮಶ ಪ್ರೀತಿಗೆ ಆಕೆ ನೀಡಿದ ಉಡುಗೊರೆಯ ಭಾರ ಹೊರುವಲ್ಲಿ ಆತ ಸಂಪೂರ್ಣ ನಿಷ್ಯಕ್ತನಾಗಿದ್ದ...

ತನ್ನ ವಿಫಲ ಪ್ರೇಮದಿಂದ ಕಂಗೆಟ್ಟು, ತನಗಾದ ದ್ರೋಹವನ್ನು ನೆನೆದು ಪ್ರತೀ ಕ್ಷಣ ಆತ ಬಿಕ್ಕಳಿಸುವಂತಾಗಿದೆ..

ಹೌದಲ್ಲವಾ? ತಮ್ಮ ಕ್ಷಣಿಕದ ನೋವನ್ನು ಮರೆಯೋ ಉದ್ದೇಶದಿಂದ, ಸ್ನೇಹಿತನೊಬ್ಬನ ಪರಿಸ್ತಿತಿಯನ್ನು ಪ್ರೀತಿಯ ಹೆಸರಲ್ಲಿ ಉಪಯೋಗಿಸಿಕೊಂಡ ಆ ಹುಡುಗಿಯರ ಹಾಗೆಯೇ ನಮ್ಮ ಸಮಾಜದಲ್ಲಿ ಅದೆಷ್ಟೋ ಹುಡುಗ, ಹುಡುಗಿಯರು ಪ್ರೀತಿ ಎಂಬ ಮಧುರ ಭಾಂಧವ್ಯವನ್ನು ಹಾಳುಗೆಡವಿ ಪ್ರೀತಿಯ ಅರ್ಥವನ್ನೇ ಕೆಡಿಸುತ್ತಿದ್ದಾರೆ ಅಲ್ವಾ?
ಅಂತಹ ಪ್ರೀತಿಯ ಕಪಟ ನಾಟಕವಾಡುವವರಿಗೆ ನನ್ನದೊಂದು ಧಿಕ್ಕಾರವಿರಲಿ.

ನಿಮ್ಮವ,
ಪಚ್ಚಿ

Monday, 7 July 2014

Time Heals Everything.. Life Goes On...

ಸ್ನೇಹಿತರೇ, ಯಾರಾದರೂ ನನ್ನನ್ನು ಈ ಪ್ರಪಂಚದಲ್ಲಿ ಅತ್ಯಂತ ಪ್ರಾಮುಖ್ಯವಾದ, ಪ್ರಖರವಾದ, ದುಬಾರಿಯಾದ, 'The Most Powerful Thing' ಅಂತಾರಲ್ಲ ಅದು ಏನು ಅಂತ ಕೇಳಿದ್ರೆ, ನನ್ನ ಉತ್ತರ ಖಡಾಖಂಡಿತವಾಗಿ 'TIME' ಆಗಿರತ್ತೆ.. ನಿಮ್ಮ ಜೀವನದಲ್ಲಿ ಯಾರಾದರೂ ನಿಮಗೆ ಅಂತ ಸ್ವಲ್ಪ ಸಮಯ ಮೀಸಲು ಇಟ್ಟು, ನಿಮ್ಮೊಂದಿಗೆ ಅವರ ಸಮಯವನ್ನು ಹಂಚಿಕೊಂಡರೆ, ಖಂಡಿತ ನೀವು ಅವರನ್ನು ಗೌರವಿಸಲೇಬೇಕು.. ಆ ವ್ಯಕ್ತಿ ತನ್ನ ಜೀವನದ ಒಂದು ಭಾಗವನ್ನೇ ನಿಮ್ಮೊಂದಿಗೆ Share ಮಾಡ್ಕೋತಾ ಇದ್ದಾನಲ್ಲ ಅದಿಕ್ಕೆ..

ಒಂದು ಸಂಭಂಧವನ್ನು ಇನ್ನಸ್ಟು ಹತ್ತಿರವಾಗಿ ಬೆಸೆಯುವ ಮತ್ತು ಇನ್ನಸ್ಟು ದೂರಮಾಡುವ ಶಕ್ತಿ ಇರೋದು ಕೇವಲ TIMEಗೆ, ಮನುಷ್ಯನನ್ನು ಅತ್ಯಂತ ಆನಂದಗೊಳಿಸುವ ಹಾಗೂ ಅತ್ಯಂತ ಖಿನ್ನ ನಾಗಿಸಿ, ಹತಾಶನನ್ನಾಗಿಸುವ ಶಕ್ತಿ ಇರುವುದು ಕೂಡ TIME ಗೆ ಮಾತ್ರ... ಎಲ್ಲರಿಗೂ ತಿಳಿದಿರುವ ಹಾಗೆ, ಕಳೆದು ಹೋದ ಸಮಯವನ್ನು ಮರಳಿ ಪಡೆಯಲು ಸಾಧ್ಯ ಇಲ್ಲ ಅಲ್ವಾ, TIME ಅನ್ನೋದು ಅಸ್ಟು ದುಬಾರಿ, ಅದಿಕ್ಕೆ ಈ ಪ್ರಪಂಚದಲ್ಲಿ ಅಸಾಧ್ಯವಾದದ್ದನ್ನು ಸಾಧಿಸುವ ಶಕ್ತಿ ಇರುವುದು ಕೂಡ ಅದೇ, TIME ಗೆ ಮಾತ್ರ...

ಮನುಷ್ಯ ಬಾಲ್ಯದಿಂದಲೂ ಅದೆಸ್ಟೋ Unexpected ಗಳನ್ನು ಎದುರಿಸುತ್ತ ಬಂದಿರುತ್ತಾನೆ, ಜೀವನ ಅಂದರೆ ಹಾಗೆ.. ಆ ಎಲ್ಲ Unexpected ಗಳನ್ನು ಎಷ್ಟು ಸಮರ್ಥವಾಗಿ ಎದುರಿಸುತ್ತೀವಿ ಅನ್ನೋದರಮೇಲೆ ಜೀವನದ ಸಾರ್ಥಕತೆ ನಿರ್ಧಾರವಾಗಿರುತ್ತದೆ.. ಒಬ್ಬ ಕ್ರೀಡಾಪಟು ಒಂದು ಮುಖ್ಯ ಪಂದ್ಯಕ್ಕಾಗಿ ಪ್ರತಿ ನಿತ್ಯ, ತಿಂಗಳುಗಳ ಕಾಲ ಅಭ್ಯಾಸ ನಡೆಸಿ, ಪಂದ್ಯ ಸಮೀಪಿಸುತ್ತಿರುವ ಸಂದರ್ಭದಲ್ಲಿ ಅಫ಼ಘಾತ ಸಂಭವಿಸಿ ಪಂದ್ಯದಲ್ಲಿ ಬಾಗವಹಿಸಲು ಅಸಾದ್ಯವಾದರೆ ಆ ಕ್ರೀಡಾಪಟುವಿನ ಮನಸ್ತಿತಿ ಯನ್ನು ಸ್ವಲ್ಪ ಹೊತ್ತು ಊಹಿಸಿ ನೋಡಿ... ಒಬ್ಬ ತಾಯಿ ೯ ತಿಂಗಳು ತನ್ನ ಗರ್ಬದಲ್ಲಿ ಮಗುವನ್ನು ಹೊತ್ತು, ಮನಸ್ಸಿನಲ್ಲಿ ಭವಿಷ್ಯದ ಕನಸು ಕಾಣುತ್ತಿರುವ ಸಂದರ್ಬದಲ್ಲಿ ಮಗು ಕಣ್ಣು ತೆರೆಯದೇ ಅಸುನೀಗಿದರೆ ಆ ತಾಯಿಯ ಮನಸ್ತಿತಿ ಹೇಗಿರಬಹುದು..? ಪ್ರಾಣಕ್ಕೆ ಪ್ರಾಣ ನೀಡಲು ಸಿದ್ದವಿರುವಸ್ಟು ಪ್ರೀತಿಸಿ, ಪರಸ್ಪರರ ಮನಸ್ಸಿನಲ್ಲಿ ಕನಸಿನ ಗೋಪುರ ಕಟ್ಟಿ ಕೊನೆಯಲ್ಲಿ ಯಾವುದೊ ಒತ್ತಡಕ್ಕೆ ಮಣಿದು, ಇನ್ಯಾವುದೋ ಕಾರಣ ನೀಡಿ ಸಂಗಾತಿಯನ್ನು ತೊರೆದು ಹೋದಾಗ ಅದೇ ಸಂಗಾತಿ ನೆನಪಿನಲ್ಲಿ ಕಾಲಕಳೆಯುತ್ತಿರುವವನ/ಳ ಮನಸ್ತಿತಿಯನ್ನು ಊಹಿಸಲು ಸಾದ್ಯವೇ..? ಹೀಗೆ ಅದೆಸ್ಟೋ ಊಹಿಸಲು ಸಾಧ್ಯವಾಗದೆ ಇರುವಂತಹ Unexpected ಗಳು ಎದುರಾದಾಗ ಪ್ರತಿಯೊಬ್ಬ ಕೂಡ ಒಂದು ಕ್ಷಣ ವಿಚಿಲಿತನಾಗುವುದು ಸಾಮಾನ್ಯ.. ಸೋಲು, ನಿರಾಸೆ, ಹತಾಶೆ, ದುಃಖ ಇವೆಲ್ಲ ಜೀವನದ ಕೆಲವು ಅಧ್ಯಾಯಗಳು ಅಸ್ಟೆ..

ಪ್ರತಿನಿತ್ಯ ಪತ್ರಿಕೆಗಳಲ್ಲಿ, ಟೀವಿ ಮಾಧ್ಯಮಗಳಲ್ಲಿ ಅದೆಸ್ಟೋ ಆತ್ಮಹತ್ಯಾ ಪ್ರಕರಣಗಳು, ಕೊಲೆ, ಅತ್ಯಾಚಾರ, ಆಸಿಡ್ ದಾಳಿ ಪ್ರಕರಣಗಳು ವರದಿ ಆಗ್ತಾನೆ ಇರತ್ತೆ, ಇದಕ್ಕೆಲ್ಲ ಕಾರಣಗಳು ಅಥವಾ Motive ಅಂತೀವಲ್ಲ ಅದು ಏನೇ ಇರಬಹುದು, ಆದರೆ ಈ ಎಲ್ಲ ಪ್ರಕರಣಗಳು ಸಂಭವಿಸೋದು ಮನುಷ್ಯ ತಾಳ್ಮೆ ಕಳೆದುಕೊಂಡಾಗ, ಅದೇ ಮನುಷ್ಯ Time ಕೊಟ್ಟು ನೋಡೋಣ, ಸ್ವಲ್ಪ ಕಾದು ನೋಡೋಣ ಎಂಬ ಚಿಂತನೆ ಮಾಡಿದ್ದರೆ ಖಂಡಿತ ಇಂತಹ ಅದೆಸ್ಟೋ ಘಟನೆಗಳು ಸಂಭವಿಸುತ್ತಾನೆ ಇರಲಿಲ್ಲ ಅಲ್ವಾ? ಇದನ್ನೆಲ್ಲಾ ಬರೆಯೋದು, ಸಲಹೆ ಕೊಡೋದು ತುಂಬಾನೇ ಸರಳ ಆದರೆ ಆ ಕಾಯೋ ಸಮಯ, ತಾಳ್ಮೆಯಿಂದ ಇರಬೇಕಾದ ಸಮಯ ಇದೆಯಲ್ಲ ಅದು ಮನುಷ್ಯನ ನಿಜವಾದ ಅಘ್ನಿಪರೀಕ್ಷೆ...

ಮನಸ್ಸು ಅತ್ಯಂತ ಚಂಚಲ ಸ್ನೇಹಿತರೆ, ಕೆಟ್ಟದ್ದನ್ನೇ ಹೆಚ್ಚಾಗಿ ಯೋಚನೆ ಮಾಡ್ತಾ ಇರತ್ತೆ, ಆ ಒಂದು ಕ್ಷಣದಲ್ಲಿ ಏನಾದರೂ ಒಂದು ನಿರ್ಧಾರಕ್ಕೆ ಬಂದುಬಿಡಬೇಕು, ತನಗೆ ಆದ ಮೋಸ ಆಗಿರಬಹುದು, ನೋವಾಗಿರಬಹುದು ಅದಕ್ಕೆ ಪ್ರತಿಯಾಗಿ ದ್ವೇಷ ಸಾಧಿಸಲೇಬೇಕು ಅನ್ನೋ ನಿರ್ಧಾರಕ್ಕೆ ಮನಸ್ಸು ಮನುಷ್ಯನನ್ನು ಪ್ರೇರೇಪಿಸುತ್ತಾನೆ ಇರತ್ತೆ... ಆದರೆ ಆ ಮನಸ್ಸನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುವಂತ ಸಾಮರ್ತ್ಯವನ್ನು ಪ್ರತಿಯೊಬ್ಬ ಕೂಡ ಬೆಳೆಸಿಕೊಳ್ಳಲೆಬೇಕು... ಇದು ನಾನು ನನ್ನ ಸ್ವಂತ ಅನುಭವದಿಂದ ಕೋಪ ಕಡಿಮೆ ಮಾಡಿಕೊಳ್ಳೋಕೆ ಕಂಡುಕೊಂಡ ಮಾರ್ಗ, ನನಗೆ ತುಂಬಾ ಕೋಪ ಬಂದ್ರೆ, ನಾನು ಹೇಳ್ಬೇಕು ಅಂತಿರೋ ವಿಷಯವನ್ನು ನನ್ನ mobile ನಲ್ಲೋ, ಇಲ್ಲ laptop ನಲ್ಲೋ ಟೈಪ್ ಮಾಡ್ಕೊತ ಇರ್ತೀನಿ, type ಮಾಡಿ ಹಾಗೆ ಇಟ್ಕೋತಿನಿ, ಖಂಡಿತಾ ಯಾರಿಗೂ send ಮಾಡಲ್ಲ.. ಒಂದೆರಡು ಸಲ ಓದ್ಕೋತಾ ಇದ್ರೆ ಕೋಪ ನಿಧಾನವಾಗಿ ತನ್ನಿಂದತಾನೇ  ಕಡಿಮೆ ಆಗ್ತಾ ಬರತ್ತೆ, send ಮಾಡೋ ಪರಿಸ್ತಿತಿನೂ ಬರಲ್ಲ.. ಈ Technique ಬೇಕಾದ್ರೆ ನೀವು ಟ್ರೈ ಮಾಡಿ..

ಪ್ರಪಂಚ ತುಂಬಾ ವಿಶಾಲವಾಗಿದೆ ಸ್ನೇಹಿತರೆ, ನಮ್ಮ ಕಲ್ಪನೆಗೂ ಮೀರಿದ ಅದೆಸ್ಟೋ ಅದ್ಬುತಗಳು ನಮ್ಮ ಪ್ರಪಂಚದಲ್ಲಿದೆ, ಹೊಸ ಊರುಗಳಿಗೆ ಭೇಟಿ ನೀಡಿ, ಹೊಸ ಜನರನ್ನು ಭೇಟಿಮಾಡಿ, ಹೊಸ ಸಂಸ್ಕೃತಿಯ ಬಗ್ಗೆ ಅಧ್ಯಯನ ನಡೆಸಿ, ಸಮಾಜ ಸೇವೆಯಲ್ಲಿ ಭಾಗವಹಿಸಿ, ಅದೆಸ್ಟೋ ಅನಾಥಶ್ರಮಗಳಿವೆ, ವೃದ್ದಾಶ್ರಮಗಳಿವೆ ನಿಮ್ಮ ಕೈಲಾದ ಸಹಾಯ ಮಾಡಿ, ನಿಮ್ಮನ್ನು ಸಂಪೂರ್ಣವಾಗಿ ಯಾವುದಾದರೊಂದು ಕೆಲಸದಲ್ಲಿ ತೊಡಗಿಸಿಕೊಳ್ಳಿ... ಮನಸ್ಸಿನ ನೋವು ಎಸ್ಟೇ ಕಷ್ಟದ್ದಾಗಿದ್ದರೂ ಕೂಡ ಖಂಡಿತ ನೀವು ಆ ನೋವಿನಿಂದ ಹೊರಬರುತ್ತೀರಿ.

ನಮ್ಮನ್ನು ಮೊದಲು ನಾವು ಪ್ರೀತಿಸುವುದನ್ನು ರೂಢಿಸಿಕೊಳ್ಳಬೇಕು, ನಂತರ ಇನ್ನೊಬ್ಬರ ಪ್ರೀತಿಯನ್ನು ಬಯಸುವುದು ಒಳ್ಳೆಯದು ಅಲ್ಲವೇ, ನೋವಿನಿಂದ ಹೊರಬರಬೇಕೋ ಅಥವಾ  ಅದೇ ನೋವಿನಲ್ಲೇ  ಕೊರಗುತ್ತಾ ಇರಬೇಕೋ ಅನ್ನೋದನ್ನ ನಿರ್ಧಾರ ಮಾಡಬೇಕಾದವರು ನಾವೆ ತಾನೇ.. ನಮ್ಮ ಸ್ನೇಹಿತರು, ಬಂಧುಗಳು, ಆತ್ಮೀಯರು ಕೇವಲ ಧೈರ್ಯ ನೀಡಿ, ಸಮಾಧಾನದ ಮಾತುಗಳನ್ನಾಡಬಹುದೇ ಹೊರತು ಸದಾಕಾಲ ನಮ್ಮ ನೋವಿನೊಂದಿಗೆ ಕೊರಗುತ್ತಾ ಇರಲು ಸಾದ್ಯವಾದೀತೇ..

Timeಗೆ ಅಸಾಧ್ಯ ಅನ್ನೋದು ಯಾವುದೂ ಇಲ್ಲ, ನೀವೇ ವಿಚಾರ ಮಾಡಿ, ನಮಗೆ ಅತ್ಯಂತ ಆತ್ಮೀಯರಾದವರು ತೀರಿಹೋದಾಗ ಪ್ರತಿಯೊಬ್ಬ ಮನುಷ್ಯ ಕೂಡ ದುಃಖ ಪಟ್ಟುಕೊಳ್ಳುವುದು ಸಹಜ, ಆದರೆ ಈ ದುಃಖ ಕಾಲಕಳೆದಂತೆ ಕಡಿಮೆಆಗುತ್ತಾ ಹೋಗಿ ಒಂದು ವಾರ ಇಲ್ಲವೇ, ಒಂದು ತಿಂಗಳಿನಲ್ಲಿ ಮನುಷ್ಯ ಸಹಜ ಜೀವನಕ್ಕೆ ಹೊಂದಿಕೊಳ್ಳುತ್ತಾನಲ್ಲ ಹಾಗೆಯೇ ಪ್ರತಿಯೊಂದು ಕೂಡ ಕಾಲಕಳೆದಂತೆ ಸಹಜ ಸ್ತಿತಿಗೆ ಬಂದೇ ಬರುತ್ತದೆ..

ಗಾಂದಿಜಿ ಸ್ವಾತಂತ್ರ್ಯ ಹೋರಾಟದಲ್ಲಿ ಸೆರೆಮನೆಗೆ ಸೇರಿದಾಗ ಹಾಗೂ ಬ್ರಿಟಿಷರಿಂದ ಏಟು ತಿಂದು ಖಿನ್ನನಾಗಿ ತಮ್ಮ ಪ್ರಯತ್ನ ಕೈ ಬಿಟ್ಟಿದ್ದರೆ ಮೋಹನದಾಸ್ ಕರಮಚಂದ್ ಗಾಂಧೀ 'ಮಹಾತ್ಮಾ ಗಾಂಧೀಜಿ' ಆಗ್ತಾ ಇರಲಿಲ್ಲ... ಬಾಹ್ಯ ಪ್ರಪಂಚದ ಸಂಪರ್ಕವೇ ಇಲ್ಲದೆ, ಬೆಳಕು, ಗಾಳಿ ಸ್ಪರ್ಷ್ಯವಿಲ್ಲದೆ ತನ್ನ ದೇಹಕ್ಕಿಂತ ಕಿರಿದಾದ ಸೆರೆಮನೆಯ ಕೋಣೆಯಲ್ಲಿ ೧೮ ವರ್ಷಗಳ ಕಾಲ ಕಳೆದ ಮನುಷ್ಯ ತನ್ನ ಜೀವನದ ಬಗ್ಗೆ ಹತಾಶ ಭಾವನೆ ತೆಳೆದಿದ್ದರೆ ದಕ್ಷಿಣ ಆಫ್ರಿಕಾ ದೇಶದ ಅಧ್ಯಕ್ಷನಾಗುತ್ತಾ ಇರಲಿಲ್ಲ ಅಲ್ವ ಸ್ನೇಹಿತರೆ... ಸೋಲಿಲ್ಲದ ಗೆಲುವು ಇರೋದಿಕ್ಕೆ ಸಾಧ್ಯವೇ ಇಲ್ಲ ಅಲ್ವಾ.. ಅಸಾಧ್ಯವನ್ನು ಸಾಧಿಸಿದ ಅದೆಸ್ಟೋ ಮಹಾತ್ಮರು ತಮ್ಮ ಜೀವನದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಸೋಲನ್ನು ನೋಡಿರುತ್ತಾರೆ...

So Time Heals Everything and Life Goes On ಜೀವನದಲ್ಲಿ ಎಂತಹುದೇ ಕಷ್ಟಗಳು ಬರಲಿ, Unexpectedಗಳು ಎದುರಾಗಲಿ, ಧೈರ್ಯಕಳೆದುಕೊಳ್ಳಬೇಡಿ, ಯಾವುದೇ ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ, ಸಮಯ ಕಳೀತಾ ಕಳೀತಾ ಎಲ್ಲ ಸಹಜ ಸ್ತಿತಿಗೆ ಬಂದೇ ಬರತ್ತೆ... ಧಟ್ಟ ಮೋಡ ಕವಿದ ಆಕಾಶ ಮಳೆಯಾದಮೇಲೆ ತನ್ನ ಸ್ವಚ್ಛ ನೀಲಿ ಬಣ್ಣಕ್ಕೆ ಹಿಂದುರುಗಲೇ ಬೇಕು, ಹಾಗೇ ರಾತ್ರಿ ಕಳೆದರೆ ಮಾತ್ರ ಅಲ್ವೇ ಹಗಲು ಬರೋದು...???

ಶುಭವಾಗಲಿ
-ಪಚ್ಚಿ.